Posts

Showing posts from November, 2021

ಕರುಣಿಸು ಮುಗಿಲೇ ಮಾಗಿಯ

  ಇಳೆಗಿಳಿಸೇ  ಮುಗಿಲೇ ಮಾಗಿಯ  ನೆನೆ ನೆನೆದು ಭುವಿ  ಅದ್ದಿ ಒದ್ದೆಯಾಗಿದೆ  ಸೇರಿದೆ ಕೊಯ್ದ ತೆನೆ ರಾಶಿ ನೀರಡಿಗೆ    ಮಣ್ಣ ಕುವರನ  ಕಣ್ಣು ಕೊಳವಾಗಿದೆ  ಹಿಂಗಾರುಸೋನೆ  ಕಣ್ಣೀರಾಗಿದೆ  ಉದುರಡಿಕೆ ತೇಲಿ ಹೋಗಿದೆ  ಸೊರಗಿದೆ ಬಳ್ಳಿ ಮೆಣಸು ಹೆದರಿದೆ  ಸುರಿಯೇ ಮಾಗಿಯ ಮುಗಿಲೇ  ಪೂಗ ಗೊನೆ ಮರ ನೆಲವನಪ್ಪಿದೆ  ಕದಳಿಯ ಬುಡ ಮೇಲಾಗಿದೆ  ಕೊಚ್ಚಿಹೋಗಿದೆ ನೀರುಕ್ಕಿ ಗೊಬ್ಬರ  ಕಳಿಸಿತ್ತ ತ್ವರಿತ ಮಾಗಿಯ  ಮುಗಿಲೇ  ಮಾಗಿಯ ಚಳಿಗೆ ಹಂಬಲಿಸಿದೆ ಮನ  ಮೈಗೆ ಬಿಗಿ ಬೆಚ್ಚನ ಉಡುಪು  ಹೊಡಸಲು ಗಡ ಗಡ ನಡುಕಕೆ  ಸುಮಧುರ ಕನಸಿನರಮನೆಗೆ ಏಕೆ ಬಂಧಿಸಿಹೆ  ಹೇಳೇ ಚಳಿಯ  ಕಳಿಸೇ ಮುಗಿಲೇ ಮಾಗಿಯ  ಮಾಗಿಯಿಲ್ಲದೆ ಉಂಟೇ ಸಂಭ್ರಮ ಒಣಗದ ಕಣಕೆ ಬಾರದು ಧಾನ್ಯ  ತುಂಬದು ರೈತರ ಹಿಗ್ಗಿನ ಕಣಜ   ಏನೋ ಕರಾಬು ಕರಾಮತಿ ಮೇಲೆ   ಮುಗ್ಗಿದೆ   ಬದುಕು ಭೂಮಿಯ ಮೇಗಡೆ  ಅರಿವಿಗೆ ಬಾರದು ಈ ಕಾಲಮಹಿಮೆ   ಕರುಣಿಸು ಬೇಗ ರವಿದರ್ಶನ ನಾಡಿಗೆ  ಮಾಗಿಯ ಬಂಧನ ಬಿಡಿಸೇ ಮುಗಿಲೇ  ……..ರಾಜೀವ ಅಜ್ಜೀಬಳ